ಧಾರವಾಡ: ತಾಲೂಕಿನ ಕಲ್ಲೂರ ಗ್ರಾಮದಲ್ಲಿ ವ್ಯಕ್ತಿಯೋರ್ವ ಕುಡಿಯುವುದನ್ನ ಬಿಡು ಎಂದು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಶರಣಾದ ಘಟನೆ ನಡೆದಿದೆ.
ಇದನ್ನೂ ಓದಿ: ರಾತ್ರಿ ಹೊತ್ತು ಮನೆ ಮುಂದೆ ಬೈಕ್ ನಿಲ್ಲಿಸುವಾಗ ಹುಷಾರ್…! ಪೆಟ್ರೋಲ್ ಕಳ್ಳರ ಹಾವಳಿ ಜಾಸ್ತಿಯಾಗಿದೆ..!
ಕಲ್ಲೂರ ಗ್ರಾಮದ ಶ್ರೀಶೈಲ್ ಮಡಿವಾಳೆಪ್ಪ ಕುರುಬಗಟ್ಟಿ ಎಂಬ 36 ವಯಸ್ಸಿನ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ನಿರಂತರ ಮದ್ಯ ಸೇವನೆ ಮಾಡಿ ಆರೋಗ್ಯವನ್ನ ಹಾಳು ಮಾಡಿಕೋ ಬೇಡಾ ಎಂದಿದ್ದನ್ನೇ, ಮನಸ್ಸಿಗೆ ಹಚ್ಚಿಕೊಂಡು ಅಟ್ಟದ ಮೇಲೆ ಹೋಗಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ ..! ದಾಳಿ ಹೇಗಾಯ್ತು.?
ಗರಗ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.