• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Latest News

ಬಿಟಿವಿ ಮೆಗಾ ಸರ್ವೆ : ಶಾಸಕ ಹಿಟ್ನಾಳ್ ಓಟಕ್ಕೆ ಬ್ರೇಕ್ ಹಾಕುತ್ತಾರಾ ಬಿಜೆಪಿ ಅಭ್ಯರ್ಥಿ..? ಟಿಕೆಟ್ ಗೊಂದಲದಿಂದ ಕೇಸರಿ ಪಾಳಯಕ್ಕೆ ಮತ್ತೆ ಹಿನ್ನಡೆ..?

January 23, 2023
in Latest News, Political, State
Reading Time: 1 min read
0 0
0
ಬಿಟಿವಿ ಮೆಗಾ ಸರ್ವೆ : ಶಾಸಕ ಹಿಟ್ನಾಳ್ ಓಟಕ್ಕೆ ಬ್ರೇಕ್ ಹಾಕುತ್ತಾರಾ ಬಿಜೆಪಿ ಅಭ್ಯರ್ಥಿ..? ಟಿಕೆಟ್ ಗೊಂದಲದಿಂದ ಕೇಸರಿ ಪಾಳಯಕ್ಕೆ ಮತ್ತೆ ಹಿನ್ನಡೆ..?

ಕೊಪ್ಪಳ : ಕೊಪ್ಪಳ ಮೊದಲ ಎಲೆಕ್ಷನ್​​ನಿಂದ ಕಾಂಗ್ರೆಸ್​​​ನ ಭದ್ರಕೋಟೆಯಾಗಿತ್ತು. 1983ರಲ್ಲಿ ರಾಜ್ಯದಲ್ಲಿ ಬೀಸಿದ್ದ ಜನತಾಪಕ್ಷದ ಅಲೆಯ ನಡುವೆಯೂ ಇಲ್ಲಿ ಕಾಂಗ್ರೆಸ್​ ಗೆದ್ದಿತ್ತು. ಆದ್ರೆ, 1985ರಲ್ಲಿ ಕಾಂಗ್ರೆಸ್​ ಭದ್ರಕೋಟೆಯನ್ನ ಭೇದಿಸಲು ಜನತಾ ಪಕ್ಷ ಯಶಸ್ವಿಯಾಗಿತ್ತು. ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದಿದ್ರು. 1994ರಲ್ಲಿ ಮೊದಲ ಬಾರಿಗೆ ಸಂಗಣ್ಣ ಕರಡಿ ಪಕ್ಷೇತರವಾಗಿಸ್ಪರ್ಧಿಸಿ ಗೆದ್ರೆ, 1999ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಗೆದ್ದಿದ್ರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂಗಣ್ಣ ಕರಡಿ 2004ರಲ್ಲಿ ಸೋತ್ರೆ, 2008ರಲ್ಲಿ ಜೆಡಿಎಸ್​​ನಿಂದ ಸ್ಪರ್ಧಿಸಿ ಗೆದ್ದಿದ್ರು. 2004ರಲ್ಲಿ ಈಗಿನ ಶಾಸಕ ರಾಘವೇಂದ್ರ ಹಿಟ್ನಾಳ್ ತಂದೆ, ಬಸವರಾಜ ಹಿಟ್ನಾಳ್ ಗೆದ್ದಿದ್ರು. 2013, 2018ರಲ್ಲಿ ರಾಘವೇಂದ್ರ ಹಿಟ್ನಾಳ್ ಸತತವಾಗಿ ಗೆದ್ದಿದ್ದು, ಈ ಬಾರಿ ಹ್ಯಾಟ್ರಿಕ್ ಬಾರಿಸಲು ಹಾತೊರೆಯುತ್ತಿದ್ದಾರೆ. ಇಂತಾ ಕ್ಷೇತ್ರ 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.

2018ರ ಚುನಾವಣೆ ಫಲಿತಾಂಶ 

ರಾಘವೇಂದ್ರ ಹಿಟ್ನಾಳ್​(ಕಾಂಗ್ರೆಸ್​​)             – 98,783

ಅಮರೇಶ್​ ಸಂಗಣ್ಣ ಕರಡಿ(ಬಿಜೆಪಿ)             – 72,432

ಗೆಲುವಿನ ಅಂತರ                                     – 26,351

ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ರಾಘವೇಂದ್ರ ಹಿಟ್ನಾಳ್​ 98 ಸಾವಿರದ 783 ಮತಗಳನ್ನ ಪಡೆದಿದ್ರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಅಮರೇಶ್​​​​​ ಸಂಗಣ್ಣ ಕರಡಿ 72 ಸಾವಿರದ 432 ಮತಗಳನ್ನ ಪಡೆದಿದ್ರು. ಈ ಮೂಲಕ ರಾಘವೇಂದ್ರ ಹಿಟ್ನಾಳ್​ 26 ಸಾವಿರದ 351 ಮತಗಳ ಅಂತರದ ಭರ್ಜರಿ ಜಯ ದಾಖಲಿಸಿದ್ರು.

ಕೊಪ್ಪಳ ಜಾತಿ ಸಮೀಕರಣ

ಲಿಂಗಾಯತ                   – 56,000

ಮುಸ್ಲಿಂ                          – 35,000

ಕುರುಬ                          – 32,000

ಪರಿಶಿಷ್ಟ ಜಾತಿ                 – 31,000

ಪರಿಶಿಷ್ಟ ಜಾತಿ                 – 21,000

ಇತರ                            – 63,000

ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತದ ಸಮುದಾಯದ 56 ಸಾವಿರ ಮತದಾರರಿದ್ದು, ಇವರು ಬಿಜೆಪಿಯ ಪ್ರಬಲ ವೋಟ್​ ಬ್ಯಾಂಕ್ ಆಗಿದ್ದಾರೆ. ಮುಸ್ಲಿಂ ಸಮುದಾಯದ 35 ಸಾವಿರ ಮತದಾರರು ಕಾಂಗ್ರೆಸ್​​​​​​​​​​​​ ಮತ ಬ್ಯಾಂಕ್ ಆಗಿದ್ದಾರೆ. ಕುರುಬ ಸಮುದಾಯದ 32 ಸಾವಿರ ಮತದಾರರಿದ್ದು, ಸಿದ್ದರಾಮಯ್ಯ ಕಾರಣಕ್ಕಾಗಿ ಇವರೆಲ್ಲಾ ಕಾಂಗ್ರೆಸ್​ಗೆ ಮತ ಚಲಾಯಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 31 ಸಾವಿರ ಮತದಾರರಿದ್ದು ಸಾಂಪ್ರದಾಯಿಕವಾಗಿ ಕಾಂಗ್ರೆಸ್​ ಬೆಂಬಲಿಸಿಕೊಂಡು ಬರ್ತಿದ್ದಾರೆ. ಪರಿಶಿಷ್ಟ ಜಾತಿಯ 21 ಸಾಇರ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಇತರ ಸಮುದಾಯಗಳ 63 ಸಾವಿರ ಮತದಾರರು ಗೆಲ್ಲುವ ಅಭ್ಯರ್ಥಿ ಪರ ಮತ ಚಲಾಯಿಸಿಕೊಂಡು ಬಂದಿದ್ದಾರೆ ಅನ್ನೋದಕ್ಕೆ ಚುನಾವಣೆ ಫಲಿತಾಂಶಗಳು ಸಾಕ್ಷಿಯಾಗಿವೆ.

ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್​ ಕಳೆದ 10 ವರ್ಷಗಳಿಂದ ಶಾಸಕರಾಗಿದ್ದಾರೆ. ಇವರು ಈ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದು, ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ಹೆಚ್ಚಿರೋದು ಇವರಿಗೆ ವರವಾಗಿದೆ. ರಾಘವೇಂದ್ರ ಹಿಟ್ನಾಳ್​ ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರೋದ್ರಿಂದ, ಕುರುಬ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ರಾಘವೇಂದ್ರ ಹಿಟ್ನಾಳ್​ ಮಾಡಿರೋ ಕೆಲಸಗಳೇ ಅವರ ಕೈ ಹಿಡಿಯಲಿವೆ. ಕ್ಷೇತ್ರದಲ್ಲಿ ಎಲ್ಲೆಡೆ ರಸ್ತೆಗಳ ಡಾಂಬರೀಕರಣ, ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡಿದ್ದು, ಇವರಿಗೆ ನೆರವಾಗಲಿದೆ.

ಕೊಪ್ಪಳದಲ್ಲಿ ಈ ಬಾರಿ ರಾಘವೇಂದ್ರ ಹಿಟ್ನಾಳ್ ಗೆದ್ದರೆ ಹ್ಯಾಟ್ರಿಕ್​ ಜಯ ಸಾಧಿಸಿದಂತಾಗುತ್ತೆ. ಒಂದು ವೇಳೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ರಾಘವೇಂದ್ರ ಹಿಟ್ನಾಳ್ ಈ ಬಾರಿಗೆ ಮಂತ್ರಿಗಿರಿ ಒಲಿಯೋ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರದ ಜನ ರಾಘವೇಂದ್ರ ಹಿಟ್ನಾಳ್ ಪರ ಒಲವು ಹೊಂದಿದ್ದಾರೆ. ರಾಘವೇಂದ್ರ ಹಿಟ್ನಾಳ್ ಹಿಂದಿನಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿದ್ರೂ, ಇಲ್ಲಿ ಅಹಿಂದ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೇ ಕಾರಣಕ್ಕೆ ಇಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕ್ಷೇತ್ರದ ಅಹಿಂದ ಮತಗಳೇ ಹಿಟ್ನಾಳ್​ಗೆ ಶ್ರೀರಕ್ಷೆಯಾಗಿವೆ.

ಇನ್ನು ಬಿಜೆಪಿಯಲ್ಲಿ ಟಿಕೆಟ್​ ಗೊಂದಲ ಏರ್ಪಟ್ಟಿದ್ದು, ಸಂಗಣ್ಣ ಕರಡಿ, ಅವರ ಅಮರೇಶ್​ ಸಂಗಣ್ಣ ಕರಡಿ ಮತ್ತು ಸಿ.ವಿ.ಚಂದ್ರಶೇಖರ್ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೀತಿದೆ. ಇಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಮತ್ತೊಬ್ಬರು ಬಂಡಾಯ ಏಳಲಿದ್ದಾರೆ. ಇದು ಹಿಟ್ನಾಳ್​​​​​​ಗೆ ವರವಾಗಲಿದ್ದು, ಸುಲಭವಾಗಿ ಗೆಲ್ಲೋ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಸಂಗಣ್ಣ ಕರಡಿ ಸಂಸದರಾಗಿದ್ದರೂ, ಬಿಜೆಪಿ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದ್ರಿಂದ ಬಿಜೆಪಿಗೆ ಹಿನ್ನಡೆಯಾಗಿದೆ.

ಬಿಜೆಪಿಯಲ್ಲಿ ಎಂಎಲ್​ಸಿಯಾಗಿದ್ದ ಗಣಿ ಧಣಿ ಜನಾರ್ದನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನ ಸ್ಥಾಪಿಸಿದ್ದಾರೆ. ರೆಡ್ಡಿ ಪಾರ್ಟಿ ಬಳ್ಳಾರಿಯಲ್ಲಿ ಸದ್ದು ಮಾಡ್ತಿರೋದಕ್ಕಿಂತಾ ಹೆಚ್ಚು ಸದ್ದನ್ನು ಕೊಪ್ಪಳದಲ್ಲಿ ಮಾಡ್ತಿದೆ. ಬಿಜೆಪಿಯಲ್ಲಿದ್ದವರೇ ಪ್ರತ್ಯೇಕ ಪಕ್ಷ ಸ್ಥಾಪಿಸಿರೋದ್ರಿಂದ, ಬಿಜೆಪಿ ಕೆಲ ಕಾರ್ಯಕರ್ತರು ಹೊಸ ಪಕ್ಷ ಸೇರುವ ಸಾಧ್ಯತೆ ಇದೆ. ಇದು ಸಹ ಬಿಜೆಪಿಗೆ ನಡುಕ ಉಂಟು ಮಾಡಿದ್ದು, ಕೊಪ್ಪಳದಲ್ಲಿ ಜನಾರ್ದನ ರೆಡ್ಡಿ ಪಕ್ಷದಿಂದ ಬಿಜೆಪಿ ಭಾರಿ ಏಟು ಬೀಳೋ ಭಯ ಕಾಡ್ತಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದಕ್ಕೆ ಚುನಾವಣೆ ಫಲಿತಾಂಶ ಉತ್ತರ ನೀಡಬಹುದು.

ಕೊಪ್ಪಳದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್​ ಹ್ಯಾಟ್ರಿಕ್ ಗೆಲುವು ಸಾಧಿಸೋ ಸಾಧ್ಯತೆಗಳು ಹೆಚ್ಚಾಗಿವೆ.

ಇದನ್ನೂ ಓದಿ : ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ…

 

Tags: back againBJP candidateBreakingNewsBreakingNewsinKannadaBtv EntertainmentBTV Megacamp setconfusion saffronDue ticketkannadaKannada NewsKannada News ChannelKannadaLatestNewsKannadaNewsHeadlinesKannadaNewsTodayKarnatakaLatestNewsKarnatakaNewsLatestNewsMLA Hitnalput brakesurvey will
ShareTweetSendSharePinShare
Previous Post

ಶಿರಾದಲ್ಲಿ ರಂಗೇರಿದ ಚುನಾವಣೆ ಕಾವು… JDS ಹಾಗೂ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ 250ಕ್ಕೂ ಹೆಚ್ಚು ಮುಖಂಡರು…

Next Post

ಬಿಟಿವಿ ಮೆಗಾ ಸರ್ವೆ : ಕುಷ್ಟಗಿಯಲ್ಲಿ ಬಯ್ಯಾಪುರಗೆ ತಡೆಯಾಗ್ತಾರಾ ದೊಡ್ಡನಗೌಡ..? ಮತ್ತೆ ಹಳೆ ಸಂಪ್ರದಾಯ ಮುಂದುವರಿಸ್ತಾರಾ ಕುಷ್ಟಗಿ ಜನ..?

Related Posts

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023
ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

February 4, 2023
ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023
ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

February 4, 2023
ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

February 3, 2023
Next Post
ಬಿಟಿವಿ ಮೆಗಾ ಸರ್ವೆ : ಕುಷ್ಟಗಿಯಲ್ಲಿ ಬಯ್ಯಾಪುರಗೆ ತಡೆಯಾಗ್ತಾರಾ ದೊಡ್ಡನಗೌಡ..? ಮತ್ತೆ ಹಳೆ ಸಂಪ್ರದಾಯ ಮುಂದುವರಿಸ್ತಾರಾ ಕುಷ್ಟಗಿ ಜನ..?

ಬಿಟಿವಿ ಮೆಗಾ ಸರ್ವೆ : ಕುಷ್ಟಗಿಯಲ್ಲಿ ಬಯ್ಯಾಪುರಗೆ ತಡೆಯಾಗ್ತಾರಾ ದೊಡ್ಡನಗೌಡ..? ಮತ್ತೆ ಹಳೆ ಸಂಪ್ರದಾಯ ಮುಂದುವರಿಸ್ತಾರಾ ಕುಷ್ಟಗಿ ಜನ..?

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023
ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

February 4, 2023
ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023
ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

February 4, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023
ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

February 4, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!
  • ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..
  • ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!
  • ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!
  • ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In