• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Latest News

ಬಿಟಿವಿ ಮೆಗಾ ಸರ್ವೆ : ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ತಾರಾ ತಂಗಡಗಿ..? ಕನಕಗಿರಿಯಲ್ಲಿ ಮತ್ತೆ ಗೆಲ್ಲುತ್ತಾರಾ ಬಸವರಾಜ ದಢೇಸುಗೂರು..?

January 24, 2023
in Latest News, Political, State
Reading Time: 1 min read
0 0
0
ಬಿಟಿವಿ ಮೆಗಾ ಸರ್ವೆ : ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ತಾರಾ ತಂಗಡಗಿ..? ಕನಕಗಿರಿಯಲ್ಲಿ ಮತ್ತೆ ಗೆಲ್ಲುತ್ತಾರಾ ಬಸವರಾಜ ದಢೇಸುಗೂರು..?

ಕೊಪ್ಪಳ : ಕನಕಗಿರಿ.. 1978ರಲ್ಲಿ ನಡೆದಿದ್ದ ಕ್ಷೇತ್ರ ಪುನರ್ವಿಗಡಣೆಯ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಕ್ಷೇತ್ರ. ಇಂತಾ ಕ್ಷೇತ್ರದಲ್ಲಿ ಮೊದಲ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದ್ರೆ, 1985ರ ವೇಳೆಗೆ ಜನರ ಮೂಡ್ ಬದಲಾಗಿತ್ತು. ಕಾಂಗ್ರೆಸ್ ಬದಲಿಗೆ ಜನತಾಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿದ್ರು. 1989ರಲ್ಲಿ ಮತ್ತೆ ಕಾಂಗ್ರೆಸ್​ ಗೆದ್ದಿತ್ತು. 1994ರಲ್ಲಿ ಜನತಾದಳದ ಅಭ್ಯರ್ಥಿ ಗೆದ್ದಿದ್ರು. 1999ರಲ್ಲಿ ಕಾಂಗ್ರೆಸ್ ಗೆದ್ರೆ, 2004ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ರು. 2008ರಲ್ಲಿ ಮತ್ತೆ ಕ್ಷೇತ್ರ ಪುನರ್​ವಿಂಗಡಣೆಯಾದ ಬಳಿಕ ಇದು ಮೀಸಲು ಕ್ಷೇತ್ರವಾಯ್ತು. ಅಲ್ಲಿಂದ ನಡೆದಿರೋ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಶಿವರಾಜ ತಂಗಡಗಿ ಗೆದ್ದಿದ್ರೆ, 2018ರಲ್ಲಿ ಬಿಜೆಪಿಯ ಬಸವರಾಜ ದಢೇಸುಗೂರು ಗೆದ್ದು ಬೀಗಿದ್ರು. 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.

2018ರ ಚುನಾವಣೆ ಫಲಿತಾಂಶ 

ಬಸವರಾಜ ದಢೇಸುಗೂರು(ಬಿಜೆಪಿ)           – 87,735

ಶಿವರಾಜ ತಂಗಡಗಿ(ಕಾಂಗ್ರೆಸ್​​)                  – 73,510

ಗೆಲುವಿನ ಅಂತರ                                     – 14,225

ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ದಢೇಸುಗೂರು 87 ಸಾವಿರದ 735 ಮತಗಳನ್ನ ಪಡೆದಿದ್ರೆ, ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಶಿವರಾಜ ತಂಗಡಗಿ 73 ಸಾವಿರದ 510 ಮತಗಳನ್ನ ಪಡೆದಿದ್ರು. ಈ ಮೂಲಕ ಬಸವರಾಜ ದಢೇಸುಗೂರು 14 ಸಾವಿರದ 225 ಮತಗಳ ಅಂತರದಿಂದ ಜಯದ ನಗೆ ಬೀರಿದ್ರು.

ಕನಕಗಿರಿ ಜಾತಿ ಸಮೀಕರಣ

ಪರಿಶಿಷ್ಟ ಜಾತಿ                 – 43,000

ಲಿಂಗಾಯತ                   – 42,000

ಕುರುಬ                          – 35,000

ಪರಿಶಿಷ್ಟ ಪಂಗಡ             – 29,000

ಮುಸ್ಲಿಂ                          – 17,000

ಇತರ                            – 34,000

ಕನಕಗಿರಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 43 ಸಾವಿರ ಮತದಾರರಿದ್ದು, ಎರಡು ಪಕ್ಷಗಳ ನಡುವೆ ಹಂಚಿ ಹೋಗಿದ್ದಾರೆ. ಲಿಂಗಾಯತ ಸಮುದಾಯದ 42 ಸಾವಿರ ಮತದಾರರಿದ್ದು, ಇವರು ಬಿಜೆಪಿ ವೋಟ್ ಬ್ಯಾಂಕ್ ಆಗಿದ್ದಾರೆ. ಕುರುಬ ಸಮುದಾಯದ 35 ಸಾವಿರ ಮತದಾರರಿದ್ದು, ಸಿದ್ದರಾಮಯ್ಯ ಕಾಂಗ್ರೆಸ್​​ನಲ್ಲಿರೋ ಕಾರಣಕ್ಕೆ ಕಾಂಗ್ರೆಸ್​​​ಗೆ ಮತ ಚಲಾಯಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದ 29 ಸಾವಿರ ಮತದಾರರಿದ್ದು, ಇವರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಮುಸ್ಲಿಂ ಸಮುದಾಯದ 17 ಸಾವಿರ ಮತದಾರರಿದ್ದು, ಇವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್​​ಗೆ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಇತರ ಸಮುದಾಯಗಳ 34 ಸಾವಿರ ಮತದಾರರೇ ನಿರ್ಣಾಯಕವಾಗಿದ್ದು, ಇವರು ಯಾರಿಗೆ ಮತ ಚಲಾಯಿಸ್ತಾರೋ ಅವರೇ ಇಲ್ಲಿ ಗೆದ್ದು ಬರ್ತಿದ್ದಾರೆ.

2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಸವರ ದಢೇಸುಗೂರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ರು. 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ದಢೇಸುಗೂರು 14 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ರು. ಮೊದಲ ಬಾರಿ ಗೆದ್ದಿದ್ದ ದಢೇಸುಗೂರು ಕುರಿತು ಕ್ಷೇತ್ರದ ಜನರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ರು. ಆದ್ರೆ, ಮತದಾರರು ಇಟ್ಟಿದ್ದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ದಢೇಸುಗೂರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಇದರ ನಡುವೆ ಮಾಜಿ ಶಾಸಕ ಶಿವರಾಜ ತಂಗಡಗಿ ಪರ ಕ್ಷೇತ್ರದಲ್ಲಿ ಅಲೆ ಎದ್ದಿದೆ. ಶಿವರಾಜ ತಂಗಡಗಿ ಶಾಸಕರಾಗಿದ್ದ ವೇಳೆ, ಸಚಿವರಾಗಿದ್ದ ವೇಳೆ ಮಾಡಿದ್ದ ಕೆಲಸಗಳು ಅವರ ಕೈ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಕಳೆದ ಬಾರಿ ಸೋಲಿನ ಸೇಡು ತೀರಿಸಿಕೊಳ್ಳೋಕೆ ತಂಗಡಗಿ ತವಕಿಸುತ್ತಿದ್ದಾರೆ.

ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಈ ಬಾರಿಯೂ ಕನಕಗಿರಿ ಕ್ಷೇತ್ರದಲ್ಲಿ ಅವರಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ಕ್ಷೇತ್ರದೆಲ್ಲೆಡೆ ಶಿವರಾಜ ತಂಗಡಗಿ ಮಿಂಚಿನ ಸಂಚಾರ ನಡೆಸಿದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾಜ ತಂಗಡಗಿ ಸಹ ತಾವು ಶಾಸಕರಾಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು ಶ್ರಮ ಪಡುತ್ತಿದ್ದಾರೆ. ಅಲ್ದೆ, ಹಾಲಿ ಶಾಸಕ ಬಸವರಾಜ ದಢೇಸುಗೂರು ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದು, ಜನರಿಗೆ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಕುರುಬ ಮತ್ತು ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿವೆ. ಶಿವರಾಜ ತಂಗಡಗಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಕುರುಬ ಸಮುದಾಯ ಇವರ ಬೆನ್ನಿಗೆ ನಿಂತಿದೆ.

ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಕುರಬ, ಮುಸ್ಲಿಂ ಜೊತೆಗೆ ಹಿಂದುಳಿದ ಮತಗಳು ನಿರ್ಣಾಯಕವಾಗಿವೆ. ಈ ಮತಗಳನ್ನು ಸೆಳೆಯಲು ಶಿವರಾಜ ತಂಗಡಗಿ ಭರ್ಜರಿ ಪ್ಲ್ಯಾನ್ ರೂಪಿಸಿದ್ದು, ಅಹಿಂದ ಮತಗಳಿಗೆ ಗಾಳ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಅಹಿಂದ ಮತಗಳು ಚದುರದಂತೆ ಯೋಜಿಸಿದ್ದಾರೆ. ಕುರುಬ ಸಮುದಾಯದ ಮತಗಳನ್ನ ಸೆಳೆಯಲು ಶಿವರಾಜ ತಂಗಡಗಿ ಸದಾ ಸಿದ್ದರಾಮಯ್ಯ ಜಪ ಮಾಡುತ್ತಿದ್ದಾರೆ. ಅಲ್ದೆ, ಕೆಲವೇ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಜೀವನಚರಿತ್ರೆ ಆಧಾರಿತ ಸಿನಿಮಾ ಮಾಡಲು ಸಹ ಮುಂದಾಗಿದ್ರು. ಇವೆಲ್ಲವೂ ಕ್ಷೇತ್ರದಲ್ಲಿರೋ ಕುರುಬ ಸಮುದಾಯದ ಮತಗಳನ್ನ ಹಿಡಿದಿಟ್ಟುಕೊಳ್ಳಲು ಮಾಡಿದ್ದ ಪ್ಲ್ಯಾನ್ ಅಂತಾ ರಾಜಕೀಯ ಪಂಡಿತರು ವಿಶ್ಲೇಷಿಸಿದ್ರು. ಇದರ ಜೊತೆಗೆ ಕನಕಗಿರಿ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಂಗಡಗಿ ಮತ್ತೊಮ್ಮೆ ಸಚಿವರಾಗ್ತಾರೆ ಅನ್ನೋ ಮಾತು ಕ್ಷೇತ್ರದಲ್ಲಿ ಪ್ರಚಲಿತವಾಗಿದ್ದು ಶಿವರಾಜ ತಂಗಡಗಿ ಪರ ಮತದಾರರು ಒಲವು ತೋರುತ್ತಿದ್ದಾರೆ.

ಕನಕಗಿರಿ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಮಾಜಿ ಶಾಸಕ ಶಿವರಾಜ ತಂಗಡಗಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಇದನ್ನೂ ಓದಿ : ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ… ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲು…

Tags: Basavaraja DadesuguruBreakingNewsBreakingNewsinKannadaBtv EntertainmentBTV MegaKanakagirikannadaKannada NewsKannada News ChannelKannadaLatestNewsKannadaNewsHeadlinesKannadaNewsTodayKarnatakaLatestNewsKarnatakaNewsLatestNewsrevenge lastSurvey Thandagitimes defeatwin again
ShareTweetSendSharePinShare
Previous Post

ಬಿಟಿವಿ ಮೆಗಾ ಸರ್ವೆ : ಗಂಗಾವತಿಯಲ್ಲಿ ಮ್ಯಾಜಿಕ್ ಮಾಡ್ತಾರಾ ಜನಾರ್ದನ ರೆಡ್ಡಿ..? ಹಾಲಿ ಶಾಸಕ ಪರಣ್ಣ ಮುನವಳ್ಳಿಗೆ ಈ ಬಾರಿ ಸಿಗುತ್ತಾ ಟಿಕೆಟ್..?

Next Post

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ R. ಅಶೋಕ್ ನೇಮಕ…

Related Posts

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023
ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

January 29, 2023
Next Post
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ R. ಅಶೋಕ್ ನೇಮಕ…

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ R. ಅಶೋಕ್ ನೇಮಕ...

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..!30/01/23
  • ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!
  • ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!
  • ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 
  • ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In