• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Latest News

ಬಿಟಿವಿ ಮೆಗಾ ಸರ್ವೆ : ಗಂಗಾವತಿಯಲ್ಲಿ ಮ್ಯಾಜಿಕ್ ಮಾಡ್ತಾರಾ ಜನಾರ್ದನ ರೆಡ್ಡಿ..? ಹಾಲಿ ಶಾಸಕ ಪರಣ್ಣ ಮುನವಳ್ಳಿಗೆ ಈ ಬಾರಿ ಸಿಗುತ್ತಾ ಟಿಕೆಟ್..?

January 24, 2023
in Latest News, Political, State
Reading Time: 1 min read
0 0
0
ಬಿಟಿವಿ ಮೆಗಾ ಸರ್ವೆ : ಗಂಗಾವತಿಯಲ್ಲಿ ಮ್ಯಾಜಿಕ್ ಮಾಡ್ತಾರಾ ಜನಾರ್ದನ ರೆಡ್ಡಿ..? ಹಾಲಿ ಶಾಸಕ ಪರಣ್ಣ ಮುನವಳ್ಳಿಗೆ ಈ ಬಾರಿ ಸಿಗುತ್ತಾ ಟಿಕೆಟ್..?

ಕೊಪ್ಪಳ : ಭತ್ತದ ಕಣಜ ಅಂತಾ ಕರೆಸಿಕೊಳ್ಳೋ ಗಂಗಾವತಿಯಲ್ಲಿ ಕನ್ನಡ ಮಾತನಾಡೋರಿಗಿಂತಾ ತೆಲುಗು ಭಾಷಿಕರೇ ಹೆಚ್ಚು. ಕನ್ನಡದಂತೆಯೇ ತೆಲುಗು ಕೂಡ ಇಲ್ಲಿ ಚಲಾವಣೆಯಲ್ಲಿದೆ. ಇಂತಾ ಕ್ಷೇತ್ರ ಹಲವು ದಶಕಗಳ ಕಾಲ ಕಾಂಗ್ರೆಸ್​​​ನ ಭದ್ರಕೋಟೆ ಅಂತಲೇ ಕರೆಸಿಕೊಂಡಿತ್ತು. ಕೆಲವು ಬಾರಿ ಇಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. 2004ರಲ್ಲಿ ಜೆಡಿಎಸ್​​ನ ಇಕ್ಬಾಲ್ ಅನ್ಸಾರಿ ಗೆದ್ದಿದ್ರು. 2008ರಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದಿದ್ರು. 2013ರಲ್ಲಿ ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಮತ್ತೆ ಗೆದ್ದಿದ್ರು. ಇಂತಾ ಇಕ್ಬಾಲ್​ ಅನ್ಸಾರಿ 2018ರ ವೇಳೆಗೆ ಕಾಂಗ್ರೆಸ್​​​​​ ಸೇರ್ಪಡೆಯಾಗಿದ್ರು. ಆಗ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದಿದ್ರು. ಜೆಡಿಎಸ್​​​ನಿಂದ ಸ್ಪರ್ಧಿಸಿದ್ದ ಕರಿಯಣ್ಣ ಸಂಗಟಿ ಇಕ್ಬಾಲ್ ಅನ್ಸಾರಿ ಗೆಲುವಿಗೆ ತಡೆಯೊಡ್ಡಿದ್ರು. ಇಂತಾ 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.

2018ರ ಚುನಾವಣೆ ಫಲಿತಾಂಶ 

ಪರಣ್ಣ ಮುನವಳ್ಳಿ(ಬಿಜೆಪಿ)             – 67,617

ಇಕ್ಬಾಲ್​ ಅನ್ಸಾರಿ(ಕಾಂಗ್ರೆಸ್​)         – 59,644

ಗೆಲುವಿನ ಅಂತರ                         – 7,973

ಬಿಜೆಪಿಯಿಂದ ಸ್ಪರ್ಧಿಸಿದ್ದ ಪರಣ್ಣ ಮುನವಳ್ಳಿ 67 ಸಾವಿರದ 617 ಮತಗಳನ್ನ ಪಡೆದ್ರೆ, ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ 59 ಸಾವಿರದ 644 ಮತಗಳನ್ನ ಪಡೆದಿದ್ರು. ಈ ಮೂಲಕ 7 ಸಾವಿರದ 973 ಮತಗಳ ಅಂತರದಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆದ್ದು ಬೀಗಿದ್ರು.

ಧರ್ಮಾಧಾರಿತ ರಾಜಕಾರಣವೇ ಡ್ರೈವರ್​ ಸೀಟ್​​ನಲ್ಲಿರೋ ಗಂಗಾವತಿ ಕ್ಷೇತ್ರದಲ್ಲಿ ಸಂಘ ಪರಿವಾರ ಬಿಗಿ ಹಿಡಿತ ಹೊಂದಿದೆ. ಸಂಘ ಪರಿವಾರ ಬಿಜೆಪಿಯ ಸಂಘಟನೆಯ ಬೆನ್ನೆಲುಬಾಗಿ ನಿಂತಿದೆ. ಇಂತಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ನೋಡೋದಾದ್ರೆ,

ಗಂಗಾವತಿ ಜಾತಿ ಸಮೀಕರಣ 

ಲಿಂಗಾಯತ                   – 40,000

ಮುಸ್ಲಿಂ                          – 27,000

ಕುರುಬ                          – 25,000

ಪರಿಶಿಷ್ಟ ಜಾತಿ                 – 22,000

ಪರಿಶಿಷ್ಟ ಪಂಗಡ             – 20,000

ಇತರ                            – 59,000

ಗಂಗಾವತಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 40 ಸಾವಿರ ಮತದಾರರಿದ್ದು ಇವರು ಬಿಜೆಪಿ ಮತ ಬ್ಯಾಂಕ್ ಆಗಿದ್ದಾರೆ. ಮುಸ್ಲಿಂ ಸಮುದಾಯದ 27 ಸಾವಿರ ಮತದಾರರು ಇಕ್ಬಾಲ್ ಅನ್ಸಾರಿ ಬೆಂಬಲಕ್ಕೆ ನಿಂತಿದ್ದಾರೆ. ಕುರುಬ ಸಮುದಾಯದ 25 ಸಾವಿರ ಮತದಾರರು ಸಿದ್ದರಾಮಯ್ಯ ಕಾಂಗ್ರೆಸ್​​ನಲ್ಲಿರೋದ್ರಿಂದ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 22 ಸಾವಿರ ಮತದಾರರಿದ್ದು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬರ್ತಿದ್ದಾರೆ. ಪರಿಶಿಷ್ಟ ಪಂಗಡದ 20 ಸಾವಿರ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಇತರ ಸಮುದಾಯಗಳ 59 ಸಾವಿರ ಮತದಾರರಿದ್ದು, ಅಭ್ಯರ್ಥಿಯ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಇವರು ಯಾರಿಗೆ ಮತ ನೀಡ್ತಾರೋ ಅವರಿಗೆ ಇಲ್ಲಿ ಗೆಲ್ಲುವ ಚಾನ್ಸ್ ಜಾಸ್ತಿ ಇದೆ.

ಗಂಗಾವತಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ರೂ, ಜನರ ಕೈಗೆ ಸಿಗಲ್ಲ ಅನ್ನೋ ಆರೋಪ ಎದುರಾಗಿದ್ದು ಮತದಾರರು ಪರಣ್ಣ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕರ್ತರನ್ನ ವಿಶ್ವಾಸ ತೆಗೆದುಕೊಳ್ಳದೇ ಅವರನ್ನ ಕಡೆಗಣಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಜೊತೆಗೆ ಎಲ್ಲ ಅನುದಾನಕ್ಕೂ ಕಮಿಷನ್ ಫಿಕ್ಸ್ ಮಾಡಿದ್ದಾರೆ ಅನ್ನೋ ಭ್ರಷ್ಟಾಚಾರದ ಆರೋಪ ಅವರಿಗೆ ಮುಳುವಾಗೋ ಸಾಧ್ಯತೆಗಳು ಹೆಚ್ಚಾಗಿವೆ. ಇವೆಲ್ಲವೂ ಸಂಘ ಪರಿವಾರದ ನಾಯಕರ ಗಮನಕ್ಕೂ ಬಂದಿದ್ದು, ಇದು ಪರಣ್ಣಗೆ ಕುತ್ತು ತರೋ ಸಾಧ್ಯತೆ ಇದೆ.

ಯಾವಾಗ ಪರಣ್ಣ ಮುನವಳ್ಳಿ ವಿರುದ್ಧ ಸಂಘ ಪರಿವಾರದ ನಾಯಕರು ಅಸಮಾಧಾನಗೊಂಡಿದ್ದಾರೆ ಅಂತಾ ಗೊತ್ತಾಯ್ತೋ.. ತಕ್ಷಣವೇ ಬಿಜೆಪಿ ಟಿಕೆಟ್​ ಪಡೆದು ಸ್ಪರ್ಧಿಸಲು ಚೆನ್ನಕೇಶವ ಮತ್ತು ವಿರೂಪಾಕ್ಷಪ್ಪ ಸಿಂಗನಾಳ ಪೈಪೋಟಿ ನಡೆಸುತ್ತಿದ್ದಾರೆ. ಚೆನ್ನಕೇಶವ ಅವರು ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು, ಪರಣ್ಣಗೆ ಈ ಬಾರಿ ಟಿಕೆಟ್ ಸಿಗಲ್ಲ ತಮಗೆ ಬಿಜೆಪಿ ಟಿಕೆಟ್​ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಮತ್ತೊಬ್ಬ ಆಕಾಂಕ್ಷಿ ವಿರೂಪಾಕ್ಷಪ್ಪ ಸಿಂಗನಾಳ ಕೂಡ ಪ್ರಚಾರದಲ್ಲಿ ತೊಡಗಿದ್ರು. ಆದ್ರೆ, ಪದೇಪದೆ ಜನಾರ್ದನ ರೆಡ್ಡಿ ಜೊತೆ ಗುರುತಿಸಿಕೊಳ್ಳುತ್ತಿದ್ದು, ಇದು ಅವರಿಗೆ ಮುಳುವಾಗೋ ಸಾಧ್ಯತೆ ಇದೆ.

ಬಿಜೆಪಿಯಿಂದ ಎಂಎಲ್​ಸಿಯಾಗಿದ್ದ ಜನಾರ್ದನ ರೆಡ್ಡಿ, ತಮ್ಮ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಗಣಗಾರಿಕೆ ಆರೋಪದ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಇದ್ರು. ಈಗ ಆ ಕಳಂಕಗಳು ದೂರವಾಗಿದ್ದು, ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಮರಳಿದ್ರೂ, ಬಿಜೆಪಿ ನಾಯಕರು ಜನಾರ್ದನ ರೆಡ್ಡಿಯನ್ನ ಕಡೆಗಣಿಸಿದ್ರು. ಇದ್ರಿಂದ ಕುದ್ದು ಹೋದ ಜನಾರ್ದನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಅಂತಾ ತಮ್ಮದೇ ಹೊಸ ಪಕ್ಷವನ್ನ ಕಟ್ಟಿದ್ದು, ತಾವು ಗಂಗಾವತಿಯಿಂದ ಕಣಕ್ಕೆ ಇಳಿಯೋದಾಗಿ ಪ್ರಕಟಿಸಿದ್ದಾರೆ. ಇದರ ಭಾಗವಾಗಿ ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಜನರ ಮನವೊಲಿಸಲು ಮುಂದಾಗಿದ್ದಾರೆ.

ಬಳ್ಳಾರಿಗೆ ಅಂಟಿಕೊಂಡಂತಿರೋ ಕೊಪ್ಪಳ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಗಂಗಾವತಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಗಂಗಾವತಿಯಲ್ಲಿ ಬಿಜೆಪಿ ತನ್ನದೇ ಆದ ಮತದಾರರನ್ನ ಹೊಂದಿದೆ. ಇವರಲ್ಲಿ ಬಹುತೇಕರು ಜನಾರ್ದನ ರೆಡ್ಡಿ ಪರ ಒಲವು ಹೊಂದಿದ್ದಾರೆ. ಇಂತವರನ್ನ ತಮ್ಮೆಡೆಗೆ ಸೆಳೆಯಲು ರೆಡ್ಡಿ ಪ್ಲ್ಯಾನ್ ಮಾಡಿದ್ದು, ಇವರ ಜೊತೆಗೆ ಮುಸ್ಲಿಂ ಮತದಾರರನ್ನ ಓಲೈಸಲು ಸಹ ಮುಂದಾಗಿದ್ದಾರೆ. ಈ ಮೂಲಕ ಗಂಗಾವತಿಯಲ್ಲಿ ತಮ್ಮದೇ ಆದ ರಣತಂತ್ರ ರೂಪಿಸಿದ್ದು, ತೆಲುಗು ಭಾಷಿಕರ ಮತಗಳನ್ನ ಸೆಳೆದು ಗೆಲ್ಲಲು ಸ್ಕೆಚ್ ಹಾಕಿದ್ದಾರೆ.

ಬಿಜೆಪಿ, ಜನಾರ್ದನ ರೆಡ್ಡಿ ಕಥೆ ಇದಾದ್ರೆ, ಅತ್ತ ಕಾಂಗ್ರೆಸ್​​ನಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಆದ್ರೆ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಈಗಾಗಲೇ ಟಿಕೆಟ್​ ಫಿಕ್ಸ್ ಆದಂತೆ ಕಾಣ್ತಿದೆ. ಯಾಕಂದ್ರೆ, ತಿಂಗಳ ಹಿಂದಷ್ಟೇ ಕೊಪ್ಪಳಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಕ್ಬಾಲ್ ಅನ್ಸಾರಿಗೆ ಈ ಬಾರಿ ನಿಮ್ಮ ಮತಗಳನ್ನ ನೀಡಿ ಅಂತಾ ಹೇಳೋ ಮೂಲಕ ಅನ್ಸಾರಿಗೆ ಟಿಕೆಟ್ ಘೋಷಣೆ ಮಾಡಿದ್ರು. ಆದ್ರೆ, ಇಕ್ಬಾಲ್ ಅನ್ಸಾರಿ ಬದಲು ತಮಗೆ ಟಿಕೆಟ್​ ನೀಡಬೇಕು ಅಂತಾ ಮಾಜಿ ಎಂಎಲ್​​ಸಿ ಎಚ್​.ಆರ್​ಶ್ರೀನಾಥ್​ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರ ನಡುವೆ ಇಲ್ಲಿ ಯಾರೇ ಸ್ಪರ್ಧಿಸಲಿ ಈ ಬಾರಿ ಗೆಲುವು ನಂದೇ ಅಂತಾ ಇಕ್ಬಾಲ್ ಅನ್ಸಾರಿ ಘೋಷಿಸಿದ್ದಾರೆ.

ಕಾಂಗ್ರೆಸ್ ಇಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದ್ರೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಅಂದ್ರೆ, ಬಿಜೆಪಿ-ಕಾಂಗ್ರೆಸ್​-ಜನಾರ್ದನ ರೆಡ್ಡಿ ವಿರುದ್ಧ ಇಲ್ಲಿ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಇಕ್ಬಾಲ್ ಅನ್ಸಾರಿ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಿದ್ರೆ, ಇಕ್ಬಾಲ್ ಅನ್ಸಾರಿ ಜೆಡಿಎಸ್ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯೋದು ಪಕ್ಕಾ ಅಂತಾ ಹೇಳಿದ್ದಾರೆ. ಹೀಗೇನಾದ್ರೂ ಆದಲ್ಲಿ ಚತುಷ್ಕೋನ ಸ್ಪರ್ಧೆಗೆ ಗಂಗಾವತಿ ಸಾಕ್ಷಿಯಾಗಲಿದೆ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಇಡೀ ರಾಜ್ಯದ ಗಮನ ಸೆಳೆದಿರೋ ಗಂಗಾವತಿ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಕಾಂಗ್ರೆಸ್​​ನ ಇಕ್ಬಾಲ್ ಅನ್ಸಾರಿ ಅಥವಾ ಜನಾರ್ದನ ರೆಡ್ಡಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.

ಇದನ್ನೂ ಓದಿ : ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ… ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲು…

Tags: BreakingNewsBreakingNewsinKannadaBtv EntertainmentBTV Megado magicGangavati incumbentJanardhana ReddykannadaKannada NewsKannada News ChannelKannadaLatestNewsKannadaNewsHeadlinesKannadaNewsTodayKarnatakaLatestNewsKarnatakaNewsLatestNewsMLA ParannaMunavalli getSurvey Doesticket time
ShareTweetSendSharePinShare
Previous Post

ವಿಡಿಯೋ ವೈರಲ್ ಆಗಲು ದುಡ್ಡು ಎಸೆದೆ… ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಅರುಣ್..!

Next Post

ಬಿಟಿವಿ ಮೆಗಾ ಸರ್ವೆ : ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ತಾರಾ ತಂಗಡಗಿ..? ಕನಕಗಿರಿಯಲ್ಲಿ ಮತ್ತೆ ಗೆಲ್ಲುತ್ತಾರಾ ಬಸವರಾಜ ದಢೇಸುಗೂರು..?

Related Posts

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023
ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

January 29, 2023
Next Post
ಬಿಟಿವಿ ಮೆಗಾ ಸರ್ವೆ : ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ತಾರಾ ತಂಗಡಗಿ..? ಕನಕಗಿರಿಯಲ್ಲಿ ಮತ್ತೆ ಗೆಲ್ಲುತ್ತಾರಾ ಬಸವರಾಜ ದಢೇಸುಗೂರು..?

ಬಿಟಿವಿ ಮೆಗಾ ಸರ್ವೆ : ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ತಾರಾ ತಂಗಡಗಿ..? ಕನಕಗಿರಿಯಲ್ಲಿ ಮತ್ತೆ ಗೆಲ್ಲುತ್ತಾರಾ ಬಸವರಾಜ ದಢೇಸುಗೂರು..?

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..!30/01/23
  • ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!
  • ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!
  • ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 
  • ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In