ಸಾಮಾನ್ಯವಾಗಿ ಪ್ರಾಣಿಗಳು ತನ್ನ ಆಹಾರವನ್ನು ಹುಡುಕಿಕೊಂಡು ನಾಡಿಗೆ ಧಾವಿಸುತ್ತವೆ. ಆದರೆ ಕೆಲವು ಕಿಡಿಗೇಡಿಗಳು ಅವುಗಳನ್ನು ಹಿಂಸೆಗೊಳಪಡಿಸುತ್ತಿದ್ದಾರೆ. ಇಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಕಿಡೆಗೇಡಿಗಳು ಆನೆಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾರೆ.
ತಮಿಳು ನಾಡಿನ ಮಾಸಿನಗುಡಿಯಲ್ಲಿನ ರೆಸಾರ್ಟ್ ಬಳಿ ಆನೆಯೊಂದು ಆಹಾರ ಹುಡುಕುತ್ತಾ ಬಂದಿದ್ದು, ರಾತ್ರಿ ವೇಳೆ ಇಲ್ಲಿನ ಮೂವರ ಗುಂಪು ಚಿತ್ರ ಹಿಂಸೆ ನೀಡಿದ್ದಾರೆ. ಅಷ್ಟಕ್ಕೇ ತ್ರಪ್ತರಾಗದ ಕ್ರೂರುಗಳು ಟೈರ್ ನಂತಗ ವಸ್ತುವಿಗೆ ಬೆಂಕಿ ಹಚ್ಚಿ ಆನೆಯ ಮೇಲೆ ಎಸೆದಿದ್ದಾರೆ. . ಬೆಂಕಿಯ ಕೆನ್ನಾಲಿಗೆ ಆನೆಯ ಮೈಗೆ ಹತ್ತಿಕೊಂಡಿದೆ. ಒಂದೇ ಸಮನೆ ಆನೆಯ ಮೇಲಿನ ಕೂದಲಿಗೆ ಬೆಂಕಿ ಹತ್ತಿಕೊಂಡ ಕಾರಣ, ದಿಕ್ಕುಪಾಲಾಗಿ ಒಡತೊಡಗಿದೆ.
It’s really moving to see this tearful bid adieu to an elephant by his companion forester at Sadivayal Elephant Camp in Mudumalai Tiger Reserve, Tamil Nadu. #GreenGuards #elephants
VC: @karthisathees pic.twitter.com/xMQNop1YfI— Ramesh Pandey (@rameshpandeyifs) January 20, 2021
ಬೆಂಕಿ ನಂದಿಸಲು ಆನೆ ಹರಸಾಹಸಪಟ್ಟಿದೆ. ಮರಗಳಿಗೆ ದೇಹವನ್ನು ಉಜ್ಜತೊಡಗಿದೆ. ಮೊದಲೆ ಬೆಂಕಿ ತಗುಲಿದ ಕಾರಣ. ಆನೆಯ ಚರ್ಮ ಬೆಂದು ಹೋಗಿದೆ. ಇತ್ತ ಮರಗಳಿಗೆ ಉಜ್ಜಿದ ಕಾರಣ ಚರ್ಮ ಕಿತ್ತು ಹೋಗಿದೆ. ಕೆಲ ದಿನಗಳ ಬಳಿಕ ಅರಣ್ಯ. ಸಿಬ್ಬಂದಿ 40 ವರ್ಷ ಆನೆ ಜಲಾಶಯದ ಸಮೀಪ ಬಿದ್ದಿರುವುದು ಕಣ್ಣಗೆ ಬಿದ್ದಿದೆ. ತಕ್ಷಣವೇ ಆನೆಯನ್ನು ರಕ್ಷಿಸಲು ಧಾವಿಸಿದ್ದು ನೋವಿನಿಂದ ನರಳಿ ಆನೆ ಸಾವನ್ನಪ್ಪಿದೆ.
ತಮಿಳುನಾಡಿನ ಮದುಮಲೈ ನಲ್ಲಿರುವ ಸದಿವಯಲ್ ಎಲಿಫೆಂಟ್ ಕ್ಯಾಂಪ್ನಲ್ಲಿ ಕಿರಾತಕರು ಹಚ್ಚಿದ ಬೆಂಕಿಯಿಂದ ಪ್ರಾಣ ಬಿಟ್ಟ ಆನೆಯನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವ ವೇಳೆ ಅರಣ್ಯ ಸಿಬ್ಬಂದಿಗಳು ಕಣ್ಣೀರಿಟ್ಟ ವೀಡಿಯೋ ನಿಜವಾಗ್ಲೂ ಮನಕಲಕುತ್ತೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಕಾಡು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸುವ ಸಲುವಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.